| ತಿಂಗಳು & ವಚನಕಾರರು | ವಚನ 1 | ವಚನ 2 | |
| ಜನವರಿ 2026 ವಿಶ್ವಗುರು ಬಸವಣ್ಣ | ದೇವಲೋಕ, ಮರ್ತ್ಯಲೋಕವೆಂಬ ಸೀಮೆಯುಳ್ಳನ್ನಕ್ಕ। ಕೇವಲ ಶರಣನಾಗಲರಿಯೆ। ಸತ್ತು ಬೆರಸಿಹೆನೆಂದರೆ,। ಕಬ್ಬಿನ ತುದಿಯ ಮೆಲಿದಂತೆ। ಕೂಡಲಸಂಗಮದೇವಾ॥ | ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ। ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ। ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ। ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೆ। ಕೂಡಲಸಂಗಮದೇವಯ್ಯಾ,। ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ॥ | |
| ಫೆಬ್ರುವರಿ 2026 ಅರಿವಿನಗುರು ಅಲ್ಲಮಪ್ರಭು | |||
| ಮಾರ್ಚ್ 2026 ಚಿನ್ಮಯಜ್ಞಾನಿ ಚೆನ್ನಬಸವಣ್ಣ | |||
| ಏಪ್ರಿಲ್ 2026 ಶಿವಯೋಗಿ ಸಿದ್ಧಾರಮೇಶ್ವರ | |||
| ಮೇ 2026 ಅಕ್ಕ ಮಹಾದೇವಿ | |||
| ಜೂನ್ 2026 ತಾಯಿ ನೀಲಾಂಬಿಕೆ | |||
| ಜುಲೈ 2026 ಅಕ್ಕ ನಾಗಲಾಂಬಿಕೆ | |||
| ಆಗಸ್ಟ್ 2026 ಕಾಯಕಯೋಗಿ ನುಲಿಯ ಚಂದಯ್ಯ | |||
| ಸೆಪ್ಟಂಬರ್ 2026 | |||
| ಅಕ್ಟೋಬರ್ 2026 ಜಗದ್ಗುರು ರೇವಣಸಿದ್ಧ | |||
| ನವೆಂಬರ್ 2026 ವಿಶ್ವಬಂಧು ಮರುಳಸಿದ್ಧ | |||
| ಡಿಸೆಂಬರ್ 2026 ತೋಂಟದ ಸಿದ್ಧಲಿಂಗ ಶಿವಯೋಗಿ |
ಜನವರಿ 2026:
ದೇವಲೋಕ, ಮರ್ತ್ಯಲೋಕವೆಂಬ ಸೀಮೆಯುಳ್ಳನ್ನಕ್ಕ।
ಕೇವಲ ಶರಣನಾಗಲರಿಯೆ।
ಸತ್ತು ಬೆರಸಿಹೆನೆಂದರೆ, ಕಬ್ಬಿನ ತುದಿಯ ಮೆಲಿದಂತೆ।
ಕೂಡಲಸಂಗಮದೇವಾ॥
— ವಿಶ್ವಗುರು ಬಸವಣ್ಣನವರು
ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ।
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ।
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ।
ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೆ।
ಕೂಡಲಸಂಗಮದೇವಯ್ಯಾ,।
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ॥
— ವಿಶ್ವಗುರು ಬಸವಣ್ಣನವರು
ಫೆಬ್ರುವರಿ 2026:
ಅರಿಯದ ಕಾರಣ ಕುರುಹುವಿಡಿವೆನಲ್ಲದೆ ।
ಅರಿದ ಬಳಿಕ ಇನ್ನೇನೊ? ।
ಬಿಟ್ಟಡೆ ಸಮಯ ವಿರೋಧ । ಬಿಡದಿದ್ದರೆ ಜ್ಞಾನ ವಿರೋಧ ।
ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ,
ಕಾಣಾ ಸಿದ್ಧರಾಮಯ್ಯಾ ॥
— ಅರಿವಿನಗುರು ಅಲ್ಲಮಪ್ರಭುದೇವರು
ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕೆ ನಿಚ್ಚ ನೆನೆವ ಮನವ ಅಂದಂದಿಂಗೆ
ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
— ಅರಿವಿನಗುರು ಅಲ್ಲಮಪ್ರಭುದೇವರು
ಮಾರ್ಚ್ 2026:
ಆಯತಲಿಂಗದಲ್ಲಿ ಆಚಾರವರತು,
ಸ್ವಾಯತಲಿಂಗದಲ್ಲಿ ವಿಚಾರವರತು,
ಸನ್ನಹಿತಲಿಂಗದಲ್ಲಿ ಅನುಭಾವವರತು,
ಈ ತ್ರಿವಿಧದಲ್ಲಿ ತ್ರಿವಿಧವರತಡೆ
ಒಂದಲ್ಲದೆರಡುಂಟೆ ಕೂಡಲಚೆನ್ನಸಂಗಾ ನಿಮ್ಮಲ್ಲಿ?
— ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ, ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ.
— ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು
ಏಪ್ರಿಲ್ 2026:
ಎಮ್ಮ ವಚನದೊಂದು ಪಾರಾಯಣಕ್ಕೆ, ವ್ಯಾಸನದೊಂದು ಪುರಾಣ ಸಮಬಾರದಯ್ಯಾ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ, ಶತರುದ್ರೀಯಯಾಗ ಸಮಬಾರದಯ್ಯಾ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ, ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ
ಕಪಿಲ ಸಿದ್ಧ ಮಲ್ಲಿಕಾರ್ಜುನಾ
— ಶಿವಯೋಗಿ ಸಿದ್ದರಾಮರು
ಶರಣನ ಜಾಗೃತಿಯೆ ಶಿವರಾತ್ರಿ ಕಂಡಾ ಮನವೆ.
ಶರಣನ ನಿದ್ರೆಯೆ ಶಿವಯೋಗಸಮಾಧಿ ಕಂಡಾ ಮನವೆ.
ಶರಣನ ನುಡಿಯೆ ಶ್ರೀರುದ್ರ ಪಂಚಬ್ರಹ್ಮೋಪನಿಷತ್ತು ಕಂಡಾ ಮನವೆ.
ಶರಣನ ನಡೆಯೆ ಮುಕ್ತಿಸೋಪಾನ ಕಂಡಾ ಮನವೆ.
ಶರಣನ ಭೋಜನವೆ ಕಪಿಲಸಿದ್ಧಮಲ್ಲಿಕಾರ್ಜುನನರ್ಪಣ ಕಂಡಾ ಮನವೆ.
— ಶಿವಯೋಗಿ ಸಿದ್ದರಾಮರು
ಮೇ 2026:
ಜಲದ ಮಂಟಪದ ಮೇಲೆ, ಉರಿಯ ಚಪ್ಪರವನಿಕ್ಕಿ, ಆಲಿಕಲ್ಲ ಹಸೆಯ ಹಾಸಿ, ಬಾಸಿಗವ ಕಟ್ಟಿ,
ಕಾಲಿಲ್ಲದ ಹೆಂಡತಿಗೆ, ತಲೆಯಿಲ್ಲದ ಗಂಡ, ಬಂದು ಮದುವೆಯಾದನು.
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ ಅವ್ವಾ.
— ಅಕ್ಕ ಮಹಾದೇವಿ
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಧರಾಮಯ್ಯನ ಸಮಾಧಿಸ್ಥಲ,
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
— ಅಕ್ಕ ಮಹಾದೇವಿ
